ಮುದ್ದೇಬಿಹಾಳ: ಹಿಂದೂ ಸಮ್ಮೇಳನ ಸಂಚಾಲನ ಸಮಿತಿ ಮುದ್ದೇಬಿಹಾಳ ವತಿಯಿಂದ ಬೃಹತ್ ಹಿಂದೂ ಸಮ್ಮೇಳನ ಮತ್ತು ಬೃಹತ್ ಶೋಭಾಯಾತ್ರೆ ಜರುಗಲಿದೆ.ಎಂದು ಹಿಂದೂಪರ ಸಂಘಟನೆ ಮುಖಂಡ ಪರಶುರಾಮ ಪವಾರ್ ಹೇಳಿದರು.ಅವರು ಶುಕ್ರವಾರ ಹೂಡ್ಕೋ ಬಡಾವಣೆಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದರು.ದಿನಾಂಕ 11-01-2026ರ ರಂದು ನಗರದ ಬನಶಂಕರಿ ದೇವಸ್ಥಾನದಿಂದ ಸಕಲ ವಾದ್ಯಮೇಳದ ಮೂಲಕ ಬೃಹತ್ ಮೆರವಣಿಗೆ ಮೂಲಕ ಬೃಹತ್ ಹಿಂದೂ ಸಮ್ಮೇಳನ ಜರುಗಲಿದೆ.ಪ್ರಮುಖವಾಗಿ ಸಿದ್ಧಲಿಂಗ ದೇವರು ತಾಳಿಕೋಟೆ, ವಕ್ತಾರರಾಗಿ ವಾಗ್ಮಿಗಳಾದ ಹಣಮಂತ ಮಳಲಿ ಸೇರಿದಂತೆ ಅನೇಕ ಸ್ವಾಮಿಗಳು ಮತ್ತು ಸುಮಾರು ೫೦ ಸಮಾಜದ ಬಾಂಧವರು ಇರಲಿದ್ದು.ಕಾರಣ ಈ ಒಂದು ಬೃಹತ್ ಸಮಾವೇಶದಲ್ಲಿ ಎಲ್ಲರು ಭಾಗಿಯಾಗಿ ಯಶಸ್ವಿಗೊಳಿಸೋನ ಎಂದರು.








